

18th April 2026

ಗದಗ : ಬಾಗಲಕೋಟೆಯ ವಿಧಾನಸಭೆಯ ಉಪ ಚುನಾವಣೆಯ ಸಭೆಯಲ್ಲಿ ಕುರುಬ ಸಮುದಾಯವನ್ನು ದೂರವಿಡಬೇಕು ಎಂದು ಹೇಳಿಕೆ ನೀಡಿರುವ ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಶಾಸಕರಾಗಿ ಮುಂದುವರೆಯಲು ಯೋಗ್ಯರಲ್ಲ ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಹಿಂದಿನ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಶಿಪಾರಸ್ಸಿನ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಸಲ್ಲಿಸಿರುವುದು ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಅವರು ಕುರುಬ ಸಮುದಾಯಕ್ಕೆ ನ್ಯಾಯ ಕೊಡಿಸಲು ಶ್ರಮಿಸುತ್ತಿರುವುದು ಒಂದೆಡೆಯಾದರೆ ಅದೇ ಪಕ್ಷದ ಒಬ್ಬ ಶಾಸಕ ತನ್ನ ಪ್ರಚಾರ ಬಾಷಣದಲ್ಲಿ ಅಲ್ಪಸಂಖ್ಯಾತರನ್ನು ಮತ್ತು ಕುರುಬ ಸಮುದಾಯವನ್ನು ದೂರವಿಡಬೇಕು ಎಂದು ಬೇಜಾಬ್ದಾರಿ ಹೇಳಿಕೆ ನೀಡಿರುವುದು ಎಷ್ಟು ಸರಿ? ಇಂತವರು ಶಾಸಕರಾಗಿ ಮುಂದುವರೆಯಲು ಯೋಗ್ಯರಲ್ಲ, ಐದು ಖಾತೆಗಳನ್ನು ಪೂರೈಸಿ, ನಾಲ್ಕು ಬಾರಿ ಶಾಸಕರಾಗಿರುವ ಇವರು ಸ್ವಜಾತಿಯವರನ್ನು ಓಲೈಕೆ ಮಾಡಲು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಅಲ್ಲದೆ, ಇವರು ಕುರುಬ ಸಮುದಾಯಕ್ಕೆ ಮಾಡುತ್ತಿರುವ ಶೋಷಣೆ ಇದೇ ಮೊದಲಲ್ಲ ಈ ಹಿಂದೆ ಬಳಗಾನೂರ ಗ್ರಾಮದಲ್ಲಿ ಸ್ವಜಾತಿಯ ವಿಷ ಬೀಜ ಬಿತ್ತಿ ಕುರುಬ ಸಮುದಾಯದ ಅಮಾಯಕ 34 ಯುವಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಅವರನ್ನು ಕೋರ್ಟಿಗೆ ಅಲೆದಾಡುವಂತೆ ಮಾಡಿದ್ದಾರೆ ಇಂತವರಿಂದ ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾದ್ಯವಿಲ್ಲ ಎಂದು ಹೇಳಿದರು.
ಶಾಸಕ ಸಿ.ಸಿ.ಪಾಟೀಲ ಅವರು ಕ್ಷಮಾಪಣೆ ಕೇಳುವದು ಬೇಕಾಗಿಲ್ಲ ರಾಜ್ಯಪಾಲರು ಅವರ ಶಾಸಕ ಸ್ಥಾನವನ್ನು ವಜಾಗೊಳಿಸಬೇಕು. ಅವರು ತಮ್ಮ ತಾಕತ್ತನ್ನು ಪ್ರದರ್ಶನ ಮಾಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕುರುಬ ಸಮುದಾಯ ಮತ್ತು ಅಲ್ಪಸಂಖ್ಯಾತರ ಮತಗಳ ತಮಗೆ ಬೇಕಾಗಿಲ್ಲ ಎಂದು ಘೋಷಣೆ ಮಾಡಿ ಚುನಾವಣೆ ಎದುರಿಸಲಿ ಎಂದು ರುದ್ರಣ್ಣ ಗುಳಗುಳಿ ಅವರು ಎಚ್ಚರಿಕೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ, ನರಗುಂದ ಕ್ಷೇತ್ರದ ಮಹಿಳಾ ಮುಖಂಡರಾದ ಉಮಾ ದ್ಯಾವನೂರ, ಹಾಲುಮತ ಮಹಾಸಭಾದ ಗೌರವಾಧ್ಯಕ್ಷರಾದ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷರಾದ ಬಸವರಾಜ ನೀಲಗಾರ, ರಾಘು ವಗ್ಗನವರ, ಸೋಮನಗೌಡ ಪಾಟೀಲ, ಸತೀಶ ಗಿಡ್ಡಹನುಮಣ್ಣನವರ, ಬಸವರಾಜ ಕುರಿ, ಮುತ್ತು ಜಡಿ, ಮಂಜು ಜಡಿ, ಶಿವರಾಜ ವನ್ನೂರ, ಮಂಜು ಪೂಜಾರ, ಸೋಮು ಮೇಟಿ, ರಾಜು ಪೂಜಾರ, ರವಿ ಅಬ್ಬಿಗೇರಿ, ಶ್ಯಾಮಸುಂದರ ಡಂಬಳ, ಬಸವರಾಜ ಹೊಂಬಳ, ಮಂಜುನಾಥ ಡಂಬಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಮಹಿಳೆಯರನ್ನು ಗ್ಯಾರಂಟಿಗೆ ಸಿಮೀತಗೊಳಿಸಿದೆ- ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಆರೋಪ

ಮಹಿಳಾ ಮೀಸಲಾತಿಗೆ ವಿರೋಧ: ಹೇಮಲತಾ ನಾಯಕ ಆಕ್ರೋಶ- ಸಾಮಾನ್ಯ ಮಹಿಳೆಯರಿಗೆ ಅಧಿಕಾರ:ಕಾಂಗ್ರೆಸ್ ಅಡ್ಡಿಪಡಿಸಿದೆ

2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಎಚ್.ಕೆ. ಪಾಟೀಲ

ನವೀನ್ ಗುಳಗಣ್ಣನಗೆ ಮತ್ತೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ- ಪಕ್ಷ ಸಂಘಟನೆಯಲ್ಲಿ ವಿಫಲ: ದಢೇಸೂಗೂರಗೆ ಕೊಕ್